Kannada
About Confession Updating...
Kannada Confession
Why I have to Confess?
We Belive Therefore we speak
Kannada Confession
Word of Victory Ministries – Faith Declaration
1. ಕ್ರಿಸ್ತನ ವಾಕ್ಯವು ನಮ್ಮಲ್ಲಿ ಸಮೃದ್ದಿಯಾಗಿ ವಾಸಮಾಡುತ್ತಾ ಇದೆ(ಕೊಲೊಸ್ಸೆ3:16)
2. ಸಕಲ ಜ್ಞಾನದಿಂದ ಕೂಡಿದವರಾಗಿ ನಾವು ಒಬ್ಬರಿಗೊಬ್ಬರು ಬುದ್ದಿ ಹೇಳುವವರಾಗಿದ್ದೇವೆ. ಪವಿತ್ರಾತ್ಮಭರಿತರಾಗಿ ನಾವು ಯಾವಾಗಲೂ ಹರ್ಷಿಸುವವರಾಗಿದ್ದೇವೆ.
3. ಆತ್ಮಸಂಬಧವಾದ ಗೀತೆಗಳಿಂದಲೂ ಪದಗಳಿಂದಲೂ ಕರ್ತನಿಗೆ ನಾವು ಗಾನ ಮಾಡುವವರಾಗಿದ್ದೇವೆ.(ಎಫೆಸ 5.19)
4. ನಾವು ನಡೆಯಿಂದಾಗಲಿ ನುಡಿಯಿಂದಾಗಲಿ ಏನು ಮಾಡಿದರೂ ಅದನ್ನು ಯೇಸು ಕ್ರಿಸ್ತನ ಹೆಸರಿನಲ್ಲಿ ಮಾಡುವವರಾಗಿದ್ದೇವೆ.
5. ಕ್ರಿಸ್ತನ ಮನಸ್ಸು ನಮಗೆ ಕೊಡಲ್ಪಟ್ಟಿದೆ.(ಪಿಲಿಪ್ಪಿ 2.5) ಕಣ್ಣು ಕಾಣಲಿಲ್ಲ , ಕಿವಿ ಕೇಳಲಿಲ್ಲ, ಮನುಷ್ಯನ ಹೃದಯದಲ್ಲಿ ಅದರ ಭಾವನೆ ಹುಟ್ಟಲಿಲ್ಲ ನಮಗಾದರೋ ದೇವರು ತನ್ನ ಆತ್ಮನ ಮೂಲಕ ಅದನ್ನು ಪ್ರಕಟಿಸಿದನು.ನಮ್ಮ ಒಳಗಿರುವ ಜೀವಾತ್ಮಕ್ಕೆ ನಮ್ಮ ವಿಷಯ ಗೊತ್ತು.ನಾವು ಪ್ರಾಂಪಚಿಕ ಆತ್ಮವನ್ನು ಹೊಂದದೆ ದೇವರು ನಮಗೆ ದಯಪಾಲಿಸಿರುವ ಕೃಪಾವರಗಳನ್ನು ತಿಳುಕೊಳ್ಳುವದಕ್ಕಾಗಿ ದೇವರಿಂದ ಬಂದ ಆತ್ಮವನ್ನೇ ಹೊಂದಿದ್ದೇವೆ. (1ಕೊರಿಂಧ 2:9-12)ಆದದರಿಂದ ಆತ್ಮಸಂಬಂಧವಾದವುಗಳನ್ನು ಆತ್ಮನಿಗೆ ಯುಕ್ತವಾದ ರೀತಿಯಲ್ಲಿ ಮಾತಾಡುತ್ತೇವೆ.
6. ಕರ್ತನೇ,ನಾವು ಆತ್ಮೀಕ ಮನುಷ್ಯರು,ಕ್ರಿಸ್ತಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದಾತನ ಆತ್ಮನು ನಮ್ಮಲ್ಲಿ ವಾಸಮಾಡುತ್ತಾ ಇದ್ದಾನೆ.ದೇವರು ಅದೇ ಆತ್ಮನ ಮೂಲಕ ನಮ್ಮ ಮರ್ತ್ಯ ದೇಹಕ್ಕೆ ಜೀವವನ್ನು ಕೊಟ್ಟಿದ್ದಾನೆ(ರೋಮಪುರ8.11)
7. ನಮ್ಮ ದೇಹದ ಅಂಗಗಳು ನೊರ್ಮಲ್ ಆಗಿ ಕೆಲಸ ಮಾಡಲಿ.ಕಿವಿಗಳೇ ನೊರ್ಮಲ್ ಆಗಿ ಕೇಳಿರಿ, ಕಣ್ಣುಗಳೇ ನೊರ್ಮಲ್ ಆಗಿ ನೋಡಿರಿ.
8. ನಾವು ಶರೀರಭಾವಾಧೀನ ಪ್ರಕಾರ ನಡೆಯದೆ ನಾವು ಆತ್ಮದಲ್ಲಿ ನಡೆಯುವವರಾಗಿದ್ದೇವೆ.
9. ನಾವು ದೇವರಾತ್ಮನಿಂದ ನಡೆಸಲ್ಪಡುವವರಾಗಿದ್ದೇವೆ.
10. ನಾವು ದೇವರ ಪುತ್ರರಾಗಿದ್ದೇವೆ.(ರೋಮಪುರ8.14,15)
11. ನಾವು ದಾಸನ ಭಾವವನ್ನು ಹೊಂದದೆ ಮಗನ ಭಾವವನ್ನು ಹೊಂದಿದ್ದೇವೆ.ಅಪ್ಪಾ ತಂದೆಯೇ ಎಂದು ಕರೆಯುವ ಮಗನ ಆತ್ಮವನ್ನು ಹೊಂದಿದ್ದೇವೆ.ನಾವು ದೇವರ ಮಕ್ಕಳಾಗಿದ್ದೇವೆ ಎಂಬುದಕ್ಕೆ ಪವಿತ್ರಾತ್ಮನೇ ನಮ್ಮ ಆತ್ಮಕ್ಕೆ ಸಾಕ್ಷಿ ಹೇಳುತ್ತಾನೆ. (ರೋಮಪುರ 8:16)
12. ನಾವು ದೇವರ ಮಕ್ಕಳಾಗಿದ್ದರೆ ಬಾಧ್ಯರಾಗಿದ್ದೇವೆ, ದೇವರಿಗೆ ಬಾಧ್ಯರು, ಕ್ರಿಸ್ತನೊಂದಿಗೆ ಬಾಧ್ಯರು.ಕ್ರಿಸ್ತನೊಂದಿಗೆ ಬಾಧೆಗಳಲ್ಲಿ ನಾವು ಪಾಲುಗಾರರಾಗುದಾದರೆ, ಆತನ ಮಹಿಮೆಯಲ್ಲಿಯೂ ಪಾಲುಗಾರರಾಗಿದ್ದೇವೆ.
13. ದೇವ ಪುತ್ರರ ಮಹಿಮೆಯು ಯಾವಾಗ ಪ್ರತ್ಯಕ್ಷವಾದೀತೆಂದು ಜಗತ್ತು ಲವಲವಿಕೆಯಿಂದ ಎದುರು ನೋಡುತ್ತಾ ಇದೆ.(ರೋಮಪುರ8.19)
14. ನಾವು ಕಣ್ಣಿಗೆ ಕಂಡಂತೆ ತೀರ್ಪುಮಾಡುವುದಿಲ್ಲ(ಯೇಶಾಯ11:3)ಕಿವಿಗೆ ಬಿದ್ದ ಸುದ್ದಿಯನ್ನು ನಿರ್ಣಯಿಸುವುದಿಲ್ಲ.
15. ನಮ್ಮ ದೇಹವು ಕರ್ತನ ಮಂದಿರವಾಗಿದೆ,ದೇವರಾತ್ಮನು ನಮ್ಮ ಒಳಗೆ ವಾಸ ಮಾಡುತ್ತಾ ಇದ್ದಾನೆ.ನಾವು ಪವಿತ್ರತ್ಮನ ಮಂದಿರವಾಗಿದ್ದೇವೆ.ನಾವು ದೇಹದಲ್ಲಿಯೂ ಆತ್ಮದಲ್ಲಿಯೂ ಕರ್ತನ ಪ್ರಭಾವವನ್ನು ಪ್ರಕಾಶಿಸುವವರಾಗಿದ್ದೇವೆ.ದೇವರ ಆರೋಗ್ಯವನ್ನು ನಾವು ಪ್ರಕಾಶಿಸುವವರಾಗಿದ್ದೇವೆ.
16. ನಾವು ನೋಡುವವರಾಗಿ ನಡೆಯುವುದಿಲ್ಲ , ನಂಬುವವರಾಗಿ ನಡೆಯುತ್ತೇವೆ.(2 ಕೊರಿಂಥ5.7)
17. ಕರ್ತನೇ,ಕ್ರಿಸ್ತನಲ್ಲಿ ನಮ್ಮನ್ನು ಕತ್ತಲೆಯ ಒಳಗಿಂದ ಬೆಳಕಿನಲ್ಲಿ ಸೇರಿಸಿದಾತನ ಗುಣಾತಿಶಯಗಳನ್ನು ಪ್ರಚುರ ಮಾಡುವವರಾಗುವಂತೆ ದೇವರಾದುಕೊಂಡ ಜನಾಂಗವು ರಾಜವಂಶಸ್ಥರಾದ ಯಾಜಕರೂ ಮಿಸಲಾದ ಜನವು ದೇವರ ಸ್ವಕೀಯ ಪ್ರಜೆಯೂ ಆಗಿದ್ದೇವೆ.(1ಪೇತ್ರ2:9) ಪ್ರವಾದಿಗಳು ಆಗಿದ್ದೇವೆ,ದೊರೆತನ ಮಾಡುವವರಾಗಿದ್ದೇವೆ,
18. ಕ್ರಿಸ್ತನಲ್ಲಿ ನಾವು ಧಾರಳವಾದ ದೇವರ ಕೃಪೆಯನ್ನು ಹೊಂದಿದವರಾಗಿ ನೀತಿಯೆಂಬ ವರವನ್ನು ಹೊಂದಿದವರಾಗಿ ನಾವು ಜೀವಭರಿತರಾಗಿ ಕ್ರಿಸ್ತನಲ್ಲಿ ಆಳುವವರಾಗಿದ್ದೇವೆ (ರೋಮಪುರ5.17)
19. ಕ್ರಿಸ್ತ ಯೇಸುವಿನ ಮೂಲಕ ನಾವು ಆಳುವವರಾಗಿದ್ದೇವೆ,ವ್ಯಾಧಿಯನ್ನು ಆಳುವವರಾಗಿದ್ದೇವೆ.ಮಿತಿಗಳನ್ನು ಆಳುವವರಾಗಿದ್ದೇವೆ.ಕರ್ತನೇ ಯಾವುದೇ ರೋಗ ನಮ್ಮನ್ನು ಆಳುವುದಿಲ್ಲ ಯಾವುದೇ ಕೊರೋನಾ ನಮ್ಮನ್ನು ಮತ್ತು ನಮ್ಮ ಸಭೆಯವರನ್ನು ಆಳುವುದಿಲ್ಲ ಯೇಸುವಿನ ನಾಮದಲ್ಲಿ ನಾವು ಆಳುವವರಾಗಿದ್ದೇವೆ. ನಾವು ದೊರೆತನ ಮಾಡುವವರಾಗಿದ್ದೇವೆ.
20. ನಾವು ಕ್ರಿಸ್ತನಲ್ಲಿ ಜಯದಲ್ಲಿ ನಡೆಯುವವರಾಗಿದ್ದೇವೆ.ಸಮಾಧಾನದಲ್ಲಿ ನಡೆಯುವವರಾಗಿದ್ದೇವೆ.ಆರೋಗ್ಯದಲ್ಲಿ ನಡೆಯುವವರಾಗಿದ್ದೇವೆ.ನಾವು ದೇವರ ಸಾಮರ್ಥ್ಯದಲ್ಲಿ ನಡೆಯುವವರಾಗಿದ್ದೇವೆ.ನಾವು ದೇವರ ಬೆಳಕಿನಲ್ಲಿ ನಡೆಯುವವರಾಗಿದ್ದೇವೆ.
21. ನಾವು ಚಿಯೋನಿನಲ್ಲಿ ಹುಟ್ಟಿದವರಾಗಿದ್ದೇವೆ.ಚಿಯೋನಿನಲ್ಲಿ ಹುಟ್ಟಿದ ಯಾವ ನಿವಾಸಿಯು ತಾನು ಅಸ್ವಸ್ಥನು ಎಂದು ಹೇಳುವುದೇ ಇಲ್ಲ(ಯೆಶಾಯ 33:24) ಅಲ್ಲಿ ಅವರ ಪಾಪವು ಪರಿಹಾರವಾಗಿದೆ.ಅಲ್ಲಿ ನಮ್ಮ ಪಾಪವು ಪರಿಹಾರವಾಗಿದೆ.
22. ನಾವು ಪಾಪದ ಪಾಲಿಗೆ ಸತ್ತು ನೀತಿವಂತರಾಗಿ ಜೀವಿಸುವಂತೆ ನಮ್ಮ ಪಾಪವನ್ನು ಆತನು ತನ್ನ ದೇಹದ ಮೇಲೆ ಹೊತ್ತು ಕೊಂಡು ಹೋದನು.ಆತನ ಬಾಸುಂಡೆಗಳಿಂದ ನಮಗೆ ಗುಣವಾಗಿದೆ.(1ಪೇತ್ರ 2.24)
23. ನಾವು ಹುಟ್ಟಿದ್ದು ನಾಶವಾಗುವ ಬೀಜದಿಂದಲ್ಲ ನಾಶವಾಗದ ಬೀಜದಿಂದ ದೇವರ ಸದಾ ಜೀವವುಳ್ಳ ವಾಕ್ಯದಿಂದ ಹುಟ್ಟಿದ್ದೇವೆ.(1ಪೇತ್ರ 1.23)
24. ಕರ್ತನೇ ನಾವು ಕ್ರಿಸ್ತನಲ್ಲಿ ಸಜೀವಿಗಳಾಗಿದ್ದೇವೆ, ಚುರುಕು ಆಗಿದ್ದೇವೆ.ಕರ್ತನೇ ನಮ್ಮ ಆತ್ಮ ಪ್ರಾಣ ಶರೀರ ದೋಷವಿಲ್ಲದಾಗಿದೆ.
25. ವಿವೇಕಿಗೆ ಜೀವದ ಮಾರ್ಗವು ಅದು ಮೇಲು ಮೇಲಕ್ಕೆ ಹೋಗುವುದು(ಙ್ಞಾನೋಕ್ತಿಗಳು 15.24) ನಮ್ಮ ಮಾರ್ಗವು ಅದು ಮೇಲು ಮೇಲಕ್ಕೆ ಹೋಗುತ್ತಾ ಇದೆ.ನಾವು ಮೇಲು ಮೇಲಕ್ಕೆ ಯೇಸುವಿನ ನಾಮದಲ್ಲಿ ಹೋಗುವವರಾಗಿದ್ದೇವೆ.
26. ನಂಬುವವರಿಂದ ಈ ಸೂಚಕಕಾರ್ಯಗಳು ಉಂಟಾಗುವುದು.(ಮಾರ್ಕ16.17)ನಾವು ರೋಗಿಗಳ ಮೇಲೆ ಕೈ ಇಟ್ಟಾಗ ಅವರ ರೋಗವು ನಮಗೆ ಬರುವುದಿಲ್ಲ ಅವರು ಸ್ವಸ್ಥತೆಯನ್ನು ಹೊಂದುವವರಾಗಿದ್ದಾರೆ, ಇದನ್ನು ನಾವು ನಂಬುತ್ತೇವೆ .ನಾವು ದೆವ್ವಗಳನ್ನು ಹೊರಗೆ ಹಾಕುವವರಾಗಿದ್ದೇವೆ.ಕರ್ತನೇ, ನಮ್ಮ ಸಭೆಯಲ್ಲಿ , ಕುಟುಂಬದಲ್ಲಿ, ನಮ್ಮಆರ್ಥಿಕ ಪ್ರದೇಶದಲ್ಲಿ, ನಮ್ಮ ಮನೆಯಲ್ಲಿ ದೆವ್ವಗಳಿಗೆ ಕೆಲಸ ಮಾಡುವುದ್ದಕ್ಕೆ ಆಗುವುದಿಲ್ಲ ಯೇಸು ನಾಮದಲ್ಲಿ ನಾವು ಅದನ್ನು ಹೊರಗೆ ಹಾಕಿದ್ದೇವೆ. ನಾವು ಹೊಸಭಾಷೆಯನ್ನು ಮಾತನಾಡುವವರಾಗಿದ್ದೇವೆ.ವಿಷ ಪದಾರ್ಥ ಕುಡಿದರೂ ನಮಗೇನು ಆಗುವುದೇ ಇಲ್ಲ . ಯಾವುದೇ ವೈರಸ್,ಬ್ಯಾಕ್ಟೀರಿಯಾಗಳು, ರೋಗಗಳು ನಮ್ಮನ್ನು ಆಳುವುದಿಲ್ಲ .ನಮ್ಮಲ್ಲಿ ಜೋಯೇಯ ಜೀವ ಇದೇ.ಜೋಯೇಯ ಜೀವ ರೋಗವನ್ನು ಕೊಲ್ಲುತ್ತದೆ.
27. ಇನ್ನು ಮುಂದೆ ಶರೀರಾಧೀನ ಭಾವದಲ್ಲಿ ವಾಸಿಸುವುದಿಲ್ಲ ಆತ್ಮದಲ್ಲಿ ವಾಸಿಸುವವರಾಗಿದ್ದೇವೆ ಶರೀರದಾಶೆಯನ್ನು ನಾವು ಎಷ್ಟು ಮಾತ್ರಕ್ಕೂ ನೆರವೇರಿಸುವುದಿಲ್ಲ .
28. ಕರ್ತನೇ ನಿನ್ನ ಧಾರಾಳವಾದ ಪ್ರೀತಿಯ ರಸವನ್ನು ನಮ್ಮ ಹೃದಯದಲ್ಲಿ ಸುರಿಸಿದ್ದಿ ಸ್ತೋತ್ರ.ಪವಿತ್ರಾತ್ಮನ ಮೂಲಕ ನಮ್ಮ ಹೃದಯದಲ್ಲಿ ಸುರಿಸಿದ್ದಿ ಸ್ತೋತ್ರ.
29. ನಾವು ಬಹು ತಾಳ್ಮೆಯುಳ್ಳವರು ನಾವು ಹೊಟ್ಟೆಕಿಚ್ಚು ಪಡುವುದಿಲ್ಲ.ಮರ್ಯಾದೆಗೆಟ್ಟು ನಡೆಯುವುದಿಲ್ಲ.ನಾವು ಅಪಕಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದಿಲ್ಲ. ಸ್ವಪ್ರಯೋಜನವನ್ನು ಹುಡುಕುವುದಿಲ್ಲ. ಅನ್ಯಾಯಾವನ್ನು ನೋಡಿ ಸಂತೋಷಗೊಳುವುದಿಲ್ಲ ನಾವು ಎಲ್ಲವನ್ನು ನಂಬುತ್ತೇವೆ, ಎಲ್ಲವನ್ನು ಸಹಿಸಿಕೊಳ್ಳುತ್ತೇವೆ. ನಾವು ಎಲ್ಲರನ್ನು ಪ್ರೀತಿಸುತ್ತೇವೆ(1ಕೊರಿಂಥ 13:4-8)
30. ದುಷ್ಟರ ಅಲೋಚನೆಯಂತೆ ನಡೆಯದೆ,ಪಾಪಾತ್ಮರ ಮಾರ್ಗದಲ್ಲಿ ನಿಂತುಕೊಳ್ಳದೆ , ಧರ್ಮನಿಂದಕರೊಡನೆ ಕೂತುಕೊಳ್ಳದೆ. ದೇವರ ವಾಕ್ಯದಲ್ಲಿ ಆನಂದ ಪಡುವವರಾಗಿ ಹಗಲು-ಇರುಳು ನಾವು ಧ್ಯಾನ ಮಾಡುವವರಾಗಿದ್ದೇವೆ.ನಾವು ನೀರಿನ ಕಾಲಿವೆಗಳ ಬಳಿಯಲ್ಲಿ ಬೆಳೆದ ಮರದ ಹಾಗಿದ್ದೇವೆ.ನಾವು ತಕ್ಕ ಕಾಲದಲ್ಲಿ ಫಲಕೊಡುವವರಾಗಿದ್ದೇವೆ. (ಕಿರ್ತನೇ 1:2,3)
31. ಕರ್ತನೇ ನಾವು ನೀತಿವಂತರು,ನೀತಿವಂತರು ಖರ್ಜೂರದ ಮರದ ಹಾಗೆ ಬೆಳೆಯುವರು(ಕಿರ್ತನೇ92:12)ದೇವರ ಆಲಯದಲ್ಲಿ ಸಸಿಗಳಾಗಿ ನೆಡಲ್ಪಟ್ಟವರು
32. ನಾವು ದೇವರ ಅಂಗಳದಲ್ಲಿ ಚೆನ್ನಾಗಿ ಬೆಳೆಯುವವರಾಗಿದ್ದೇವೆ.ಕರ್ತನೇ ನಾವು ಯಾವಾಗಲೂ ಫಲಿಸುವವರಾಗಿದ್ದೇವೆ, ಶೋಭಿಸುವವರಾಗಿದ್ದೇವೆ, ಪುಷ್ಟಿ ಆಗಿದ್ದೇವೆ.
33. ಕರ್ತನೇ ನಿನ್ನ ವಾಕ್ಯವು ಯಾವಾಗಲೂ ನಮ್ಮ ಬಾಯಲ್ಲಿ ಇದೆ,ಅದಕೋಸ್ಕರ ಸ್ತೋತ್ರ. ನಾವು ಯಾವಾಗಲೂ ನಿನ್ನ ವಾಕ್ಯವನ್ನು ಕೇಳುವವರಾಗಿದ್ದೇವೆ.ನಿನ್ನ ಆಲೋಚನೆಯನ್ನು ಕೇಳುವವರಾಗಿದ್ದೇವೆ.
34. ಕ್ರಿಸ್ತನಲ್ಲಿ ನಾವು ಇದ್ದೇವೆ.ಕ್ರಿಸ್ತನಲ್ಲಿ ನಾವು ಚಲಿಸುತ್ತೇವೆ.ಕ್ರಿಸ್ತನಲ್ಲಿ ನಾವು ಜೀವಿಸುತ್ತೇವೆ (ಅ.ಕೃ 17:28)
35. ಕ್ರಿಸ್ತನಲ್ಲಿ ನಾವು ಇದ್ದುಕೊಂಡು ಫಲಕೊಡುವವರಾಗಿದ್ದೇವೆ, ಕ್ರಿಸ್ತನು ನಮ್ಮ ನೆಲೆಯಾಗಿದ್ದಾನೆ , ಕ್ರಿಸ್ತನು ನಮ್ಮ ಪರಿಸರವಾಗಿದ್ದಾನೆ.
36. ಪರಸ್ತ್ರಿಯನ್ನು/ಪರಪುರುಷನನ್ನು ನಾವು ಕೆಟ್ಟ ದೃಷ್ಠಿಯಲ್ಲಿ ನೋಡುವುದಿಲ್ಲ (ಮತ್ತಾಯ5.28)ಯುವತಿಯ/ಯುವಕನ ಮೇಲೆ ನಾವು ಕಣ್ಣು ಹಾಕುವವರಲ್ಲ.
37. ನಾವು ಅಂರ್ತಯದಲ್ಲಿ ಬಲ ಹೊಂದಿದವರಾಗಿದ್ದೇವೆ. ನಾವು ಅಂತರ್ಯದಲ್ಲಿ ಜಯಶಾಲಿಗಳಾಗಿದ್ದೇವೆ.ನಮ್ಮಲ್ಲಿ ಕಾರ್ಯಸಾಧಿಸುವ ತನ್ನ ಶಕ್ತಿಯ ಪ್ರಕಾರ ನಾವು ಯೋಚಿಸುವುದಕ್ಕಿಂತಲೂ ಬೇಡುವುದಕ್ಕಿಂತಲೂ ಹೆಚ್ಚಾಗಿ ಅತ್ಯಧಿಕವಾದದನ್ನು ಮಾಡಲು ಶಕ್ತನಾದ ದೇವರಿಗೆ ಸಭೆಯಲ್ಲಿಯೂ , ಕ್ರಿಸ್ತನಲ್ಲಿಯೂ ತಲಾತಲಾಂತರಕ್ಕೊ ಯುಗಯುಗಾಂತರಕ್ಕೊ ಸ್ತೋತ್ರ ಸಲ್ಲಿಸುತ್ತೇನೆ(ಎಫೆಸ3:20,21)
38. ನಮ್ಮಲ್ಲಿ ಙ್ಞಾನ ಇದೆ.ನಾವು ಪರಿಸ್ಥತಿಯನ್ನು ಹತೋಟಿಗೆ ತರುವವರಾಗಿದ್ದೇವೆ.
39. ನಮ್ಮ ಬಾಯಲ್ಲಿ ಕಾಲೋಚಿತವಾದ ಮಾತುಗಳನ್ನೇ ಹೊರಡಿಸುವವರಾಗಿದ್ದೇವೆ. (ಎಫೆಸ4.29)
40. ನಾವು ದೇವರ ಬಾಯಿಯಾಗಿದ್ದೇವೆ ,ನಾವು ತುಚ್ಚವಾದದನ್ನು ನಿರಾಕರಿಸಿ ಅಮೂಲ್ಯವಾದದ್ದನ್ನು ಮಾತಾಡುವವರಾಗಿದ್ದೇವೆ.(ಯೆರೆಮಿಯ 15.19)
41. ನಮ್ಮಲ್ಲಿ ಙ್ಞಾನವಿವೇಕದಾಯಕ ಆತ್ಮ,ಆಲೋಚನ ಪರಾಕ್ರಮಗಳನ್ನು ಹುಟ್ಟಿಸುವ ಆತ್ಮ , ತಿಳುವಳಿಕೆಯನ್ನು ಯೆಹೋವನ ಭಯವನ್ನು ಹುಟ್ಟಿಸುವ ಆತ್ಮ, ಅಂತು ಯೆಹೋವನ ಆತ್ಮವೇ ನೆಲೆಗೊಂಡಿದೆ(ಯೆಶಾಯ11.2-3)
42. ಅಬ್ರಹಾಮನಿಗೆ ಉಂಟಾದ ಆಶೀರ್ವಾದದ ಆತ್ಮನು ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯ ಮೂಲಕ ನಮಗೆ ದೊರಕಿದೆ. ನಾವು ಆಶೀರ್ವಾದದ ಆತ್ಮನಿಗೆ ಹುಟ್ಟಿದವರಾಗಿದ್ದೇವೆ. (ಗಲಾತ್ಯದವರಿಗೆ 3.13) ಆತನು ನಮ್ಮ ನಿಮಿತ್ತ ಶಾಪವಾಗಿ ಧರ್ಮಶಾಸ್ತ್ರದಲ್ಲಿ ಹೇಳಿರುವ ಶಾಪದೊಳಗಿಂದ ನಮ್ಮನ್ನು ಬಿಡಿಸಿದನು. ಕ್ರಿಸ್ತನಲ್ಲಿ ನಮಗೆ ಬಿಡುಗಡೆ ಆಗಿದೆ. ನಮಗೆ ಪಾಪದಿಂದ, ಶಾಪದಿಂದ, ರೋಗದಿಂದ, ಬಿಡುಗಡೆ ಆಗಿದೆ. ದುಷ್ಟನೇ ನಿನಗೆ ನಮ್ಮ ಮೇಲೆ ನಮ್ಮ ಕುಟುಂಬದವರ ಮೇಲೆ, ನಮ್ಮ ಜನರ ಮೇಲೆ, ಸಭೆಯವರ ಮೇಲೆ ರೋಗ ತಂದು ಹಾಕುವ ಅಧಿಕಾರ ಇಲ್ಲ.ನಿನ್ನ ಬಲವನ್ನು ಯೇಸುವಿನ ನಾಮದಲ್ಲಿ ಮುರಿಯುತ್ತೇವೆ.
43. ನಮ್ಮನ್ನು ದೊಡ್ಡ ಜನಾಂಗವಾಗುವಂತೆ ಮಾಡಿ ಆಶೀರ್ವಸಿದ್ದಿ , ನಮ್ಮ ಹೆಸರನ್ನು ಪ್ರಖ್ಯಾತಿಗೆ ತಂದಿದ್ದಿ.ನಾವು ಆಶೀರ್ವಾದದ ನಿಧಿಗಳಾಗಿದ್ದೇವೆ.(ಆದಿಕಾಂಡ 12: 2,3)ನಮ್ಮನ್ನು ಆಶೀರ್ವಾದಿಸುವವರು ಆಶೀರ್ವದಿಸಲ್ಪಡುತ್ತಾರೆ, ನಮ್ಮನ್ನು ಶಪಿಸುವವರು ಶಪಿಸಲ್ಪಡುತ್ತಾರೆ. ನಮ್ಮ ಮೂಲಕ ಅನೇಕ, ಜಾತಿ, ಕುಲ, ಭಾಷೆಯವರು ಆಶೀರ್ವಾದವನ್ನು ಹೊಂದುತ್ತಾರೆ,ಯೇಸುವನ್ನು ಹೊಂದುತ್ತಾರೆ, ಆರೋಗ್ಯವನ್ನು ಹೊಂದುತ್ತಾರೆ, ಮಹಿಮೆಯನ್ನು ಹೊಂದುತ್ತಾರೆ. ಪವಿತ್ರಾತ್ಮ ವರವನ್ನು ಯೇಸು ನಾಮದಲ್ಲಿ ಅವರು ಹೊಂದಿಕೊಳ್ಳತ್ತಾರೆ.
44. ದೇವರೇ ನಮಗೆ ಬೆಳಕಾಗಿದ್ದಾನೆ, ಆತನೇ ನಮಗೆ ಬಲವಾಗಿದ್ದಾನೆ,ಜೀವವಾಗಿದ್ದಾನೆ. (ಕೀರ್ತನೆ:27.2)ದೇವರು ನಮ್ಮ ಆತ್ಮವನ್ನು ಉಜ್ಜೀವಿಸಿದ್ದಾನೆ.
45. ದೇವರು ನಮ್ಮ ಕಣ್ಣುಗಳಿಗೆ ಜೀವ ಕೊಟ್ಟಿದ್ದಾನೆ, ದೇವರೇ ನಮ್ಮ ಕಿವಿಗಳಿಗೆ ಜೀವ ಕೊಟ್ಟಿದ್ದಾನೆ.
46. ಆತನೇ ನಮ್ಮ ಅಂಗಗಳಿಗೆ ಸಾಮರ್ಥ್ಯವನ್ನು ಕೊಟ್ಟಿದ್ದಾನೆ.ನಮ್ಮ ಇಂದ್ರಿಯಗಳಿಗೆ ಸಾಮರ್ಥ್ಯವಾಗಿದ್ದಾನೆ.
47. ನಮ್ಮ ದೇಹವು ಕ್ರಿಸ್ತನ ಅಂಗಗಳಾಗಿವೆ.(1ಕೊರಿಂಥ6.15) ದೇವರೇ ನಮ್ಮ ಅಂಗಗಳಿಗೆ ಸಾಮರ್ಥ್ಯವನ್ನು ಕೊಟ್ಟಿದ್ದಾನೆ,ನನ್ನ ಕಿವಿಗಳಿಗೆ ಸಾಮರ್ಥ್ಯವನ್ನು ಕೊಟ್ಟಿದ್ದಾನೆ,. ಅದುದರಿಂದ ನಮ್ಮ ಕಿವಿಗಳು ಸರಿಯಾಗಿ ಕೇಳುತ್ತದೆ,ನಮ್ಮ ಕಣ್ಣುಗಳಿಗೆ ಆತನೇ ಸಾಮರ್ಥ್ಯವನ್ನು ಕೊಟ್ಟಿದ್ದಾನೆ,ಅದುದರಿಂದ ನಮ್ಮ ಕಣ್ಣುಗಳು ಸರಿಯಾಗಿ ನೋಡುತ್ತವೆ.
48. ನಮಗಿರುವ ಸಾಮರ್ಥ್ಯವು ಅದು ನಮ್ಮದ್ದಲ್ಲ.ಆತನು ನಮಗೆ ಸಾಮರ್ಥ್ಯವಾಗಿದ್ದಾನೆ.ನಾವು ಆತನ ಸಾಮರ್ಥ್ಯದಲ್ಲಿ ನಡೆಯುವವರಾಗಿದ್ದೇವೆ.
49. ನಾವು ನಿನ್ನ ಪ್ರಭಾವವೆಂಬ ಜ್ಞಾನವನ್ನು ಕರ್ತನೇ ನಾವು ಎಲ್ಲ ಕಡೆ ಪ್ರಚುರಪಡಿಸುವವರಾಗಿದ್ದೇವೆ.(2ಕೊರಿಂಥ 2.14)
50. ನಾವು ವಿಶ್ರಾಂತಿಯಲ್ಲಿ ಸೇರಿದ್ದೇವೆ.
51. ನಾವು ಆತ್ಮದಲ್ಲಿಯು ಮತ್ತು ಪ್ರಾಣದಲ್ಲಿಅಭಿವೃದ್ದಿಯಾಗಿದ್ದೇವೆ. ಆಲೋಚನೆಗಳಲ್ಲಿ ಅಭಿವೃದ್ದಿಯಾಗಿದ್ದೇವೆ.ನಾವು ಜಯದ ದೇವರಿಗೆ ಹುಟ್ಟಿದ್ದೇವೆ. ನಾವು ಜಯಶಾಲಿಯಾಗಿದ್ದೇವೆ.ಅಭಿವೄದ್ದಿ ನಮ್ಮದು,ಆರೋಗ್ಯವು ನಮ್ಮದು,ಸಮೃದ್ಧಿ ನಮ್ಮದು, ಜ್ಞಾನ ನಮ್ಮದು, ರಕ್ಷಣೆ ನಮ್ಮದು.
52. ನಮ್ಮ ದೇವರು ನಮಗೆ ಮೇಜನ್ನು ಸಿದ್ಧ ಮಾಡಿದ್ದಾನೆ,( ವೈರಿಗಳ ಮುಂದೆಯೇ ನೀನು ಔತಣವನ್ನು ಸಿದ್ದಮಾಡಿದ್ದಿ (ಕೀರ್ತನೆ 23.5)
53. ನಮ್ಮ ಪಾತ್ರೆಯು ತುಂಬಿ ಹೊರಸೂಸುತ್ತದೆ, ಆರೋಗ್ಯವು ಹೊರಸೂಸುತ್ತದೆ , ಐಶ್ವರ್ಯದಲ್ಲಿ ಹೊರಸೂಸುತ್ತದೆ , ಅಭಿವೃದ್ದಿಯಲ್ಲಿ ಹೊರಸೂಸುತ್ತದೆ,ನಮ್ಮ ಪಾತ್ರೆಯು ಪ್ರೀತಿಯಲ್ಲಿ ಹೊರಸೂಸುತ್ತದೆ, ಸಮಾಧಾನಲ್ಲಿ ಹೊರಸೂಸುತ್ತದೆ.
54. ನಿಶ್ಚಯವಾಗಿ ನಮ್ಮ ಜೀವಮಾನದಲ್ಲೆಲ್ಲಾ ಶುಭವೂ ಕೃಪೆಯೂ ನಮ್ಮನ್ನು ಹಿಂಬಾಲಿಸುತ್ತದೆ.ನಾವು ಯೆಹೋವನ ಮಂದಿರದಲ್ಲಿ ಯಾವಾಗಲೂ ವಾಸವಾಗಿರುವೆವು.
55. ನೀತಿವಂತನ ಎಲುಬುಗಳನ್ನು ನೀನು ಕಾಪಾಡುವವನಾಗಿದ್ದೀ ಅದರಲ್ಲಿ ಒಂದೇ ಒಂದು ಮುರಿದು ಹೋಗುವುದಿಲ್ಲ(ಕೀರ್ತನೆ 34:20) ನಮ್ಮ ಎಲುಬುಗಳಲ್ಲಿ ಒಂದು ಮುರಿದು ಹೋಗುವುದಿಲ್ಲ.
56. ನಿನ್ನನ್ನು ದೃಷ್ಟಿಸಿದವರು ಪ್ರಕಾಶವನ್ನು ಹೊಂದಿದವರಾಗಿದ್ದಾರೆ, ಅವರ ಮುಖವು ಲಜ್ಜೆಯಿಂದ ಕೆಡುವುದೇ ಇಲ್ಲ(ಕೀರ್ತನೆ 34:5) ನಮ್ಮ ಮುಖವು ಪ್ರಕಾಶವನ್ನು ಹೊಂದಿದೆ.
57. ಆತನ ಭಯಭಕ್ತಿಯುಳ್ಳವರ ಸುತ್ತಲು ಆತನ ದೂತರ ದಂಡಿಳಿಸಿ ಕಾವಲಾಗಿದ್ದು ಕಾಪಾಡುತ್ತಾನೆ.(ಕೀರ್ತನೆ 34:7) ನಮ್ಮ ಸುತ್ತಲು ನಿನ್ನ ದೂತರನ್ನು ಕಾವಲಾಗಿದ್ದು ಕಾಪಾಡಿದ್ದಕ್ಕಾಗಿ ಸೋತ್ರ.
58. ನೀತಿವಂತನನ್ನು ದ್ವೇಷಿಸುವವರು ಅಪರಾಧಿಗಳೆಂದು ಎಣಿಸಲ್ಪಡುವರು (ಕೀರ್ತನೆ 34:21)
59. ನಮಗೆ ವಿರುದ್ಧವಾಗಿ ನಿಂತಿರುವ ಯಾವ ಆಯುಧವೂ ಜಯಿಸುವುದೇ ಇಲ್ಲ ; ಎಲ್ಲಾ ನಾಲಿಗೆಯನ್ನು ದೋಷಿಯೆಂದು ನಾವು ಖಂಡಿಸುವವರಾಗಿದ್ದೇವೆ. (ಯೆಶಾಯ54.17)
60. ನಾವು ಹಿಂಸೆಗೆ ದೂರವಾಗಿದ್ದೇವೆ.(ಯೆಶಾಯ54:14)
61. ನಮ್ಮ ಮಕ್ಕಳೆಲ್ಲರೂ ಯೆಹೋವನಿಂದ ಶಿಕ್ಷಿತರಾಗಿರುವರು, ಅವರಿಗೆ ಅಧಿಕ ಸುಕ್ಷೇಮವಾಗುವದು.(ಯೆಶಾಯ54:13)
62. ನಾವು ಯೆಹೋವನಿಗೆ ಭಯಪಡುವದರಿಂದ ನಮ್ಮಗೆ ಕೇವಲ ನಿರ್ಭಯ; ನಮ್ಮ ಮಕ್ಕಳಿಗೆ ಆಶ್ರಯವಿದ್ದೇ ಇರುವದು.(ಜ್ಞಾನೋಕ್ತಿಗಳು 14:26)
63. ನಮ್ಮ(ನೀತಿವಂತನ)ಮನೆಯಲ್ಲಿ ಧನೈಶ್ವರ್ಯಗಳು ಇದ್ದೇ ಇರುವವು (ಕೀರ್ತನೆಗಳು112:3)
64. ನಮ್ಮನ್ನು(ನೀತಿವಂತನನ್ನು) ಯಾವಾಗಲೂ ನೆನಸುವರು.(ಕೀರ್ತನೆಗಳು112:6)
65. ನಮಗೆ ಕೆಟ್ಟ ಸುದ್ದಿಯ ಭಯವಿರುವುದಿಲ್ಲ;(ಕೀರ್ತನೆಗಳು112:7)
66. ಕರ್ತನೇ, ನಮ್ಮ ಒಳ್ಳೆಯ ಕ್ರಿಯೆಗಳಿಂದಲ್ಲ, ನಿನ್ನ ಆತ್ಮನ ಮೂಲಕ ನಿನ್ನ ಕೃಪೆಯಿಂದಲೇ ನಾವು ಶುದ್ದರಾಗಿದ್ದೇವೆ. ನಿನ್ನ ಆತ್ಮನ ಮೂಲಕ ನಾವು ನಿನ್ನ ಮಕ್ಕಳಾಗಿದ್ದೇವೆ.ದೇವರ ಆತ್ಮನು ನಮ್ಮ ಒಳಗಿಂದ ಹೊರಗೆ ಕಾರ್ಯ ಮಾಡುತ್ತದೆ.
67. ನಂಬುವವರ ಹೊಟ್ಟೆಯೊಳಗಿಂದ ಜೀವಕರವಾದ ನೀರಿನ ಹೊಳೆಗಳು ಹರಿಯುತ್ತದೆ, ನಾವು ನಂಬುತ್ತೇವೆ ನಮ್ಮ ಮೂಲಕ ವಾಕ್ಯದ ಹೊಳೆಗಳು ಹರಿಯುತ್ತವೆ.(ಯೋಹಾನ 7.37).ನಮ್ಮ ಮೂಲಕ ಆರೋಗ್ಯದ ಹೊಳೆಗಳು ಹರಿಯುತ್ತದೆ, ನಮ್ಮ ಮೂಲಕ ಸಾಮರ್ಥ್ಯದ ಹೊಳೆಗಳು ಹರಿಯುತ್ತದೆ.
68. ವೈರಿಯು ಪ್ರಳಯದಂತೆ ಬಂದರೂ ದೇವರಾತ್ಮನ್ನು ನಮ್ಮ ಮೂಲಕ ಧ್ವಜವೆತ್ತಿ ನಿಲ್ಲುತ್ತಾನೆ. (ಯೆಶಾಯ59:19)
69. ನಮ್ಮನ್ನು ನಮ್ಮ ಮಕ್ಕಳನ್ನು ನಮ್ಮ ಸಭೆಯವರನ್ನು ಯಾರೆಲ್ಲ ನಮ್ಮನ್ನು ಸಂಧಿಸಿದ್ದಾರೆ ಅವರು ರಕ್ಷಿಸಲ್ಪಟ್ಟಿದ್ದಾರೆ. ಎಲ್ಲರೂ ರಕ್ಷಿಸಲ್ಪಟ್ಟಿದ್ದಾರೆ ,ಅವರು ದೇವರಿಂದ ದಯೆಯನ್ನು ಹೊಂದಿದ್ದಾರೆ. ಯಾರು ಯಾರಿಗೆ ªÉÆÃಸಮಾಡಲು ಆಗುವುದಿಲ್ಲ.
70. ನಮ್ಮ ಸಭೆಯವರಿಗೆ ಸರಿಯಾದ ಜನರು ಸರಿಯಾದ ಸಮಯದಲ್ಲಿ ಸರಿಯಾದ ಸ್ಥಳದಲ್ಲಿ ಭೇಟಿಯಾಗಿದ್ದಾರೆ, ಸಂಧಿಸಿದ್ದಾರೆ.
71. ಎಲ್ಲಾ ದುಷ್ಟನ ಯೋಜನೆಗಳನ್ನು ತಳ್ಳಿಬಿಟ್ಟು ದೇವರ ಯೋಜನೆಗಳನ್ನು ಆಲೋಚನೆಗಳನ್ನು ಅವರ ಮೇಲೆ ಘೋಷಿಸುತ್ತೇವೆ.
72. ನಮ್ಮ ಕಾಲುಗಳನ್ನು ಜಿಂಕೆಯ ಕಾಲಿನಂತೆ ಆತನು ಚುರುಕು ಮಾಡಿದ್ದಾನೆ.(ಹಬಕ್ಕೂಕನ2:19)ನಾವು ಚುರುಕಾಗಿದ್ದೇವೆ.
73. ಜಲರಾಶಿಯನ್ನು ನಾವು ಹಾದು ಹೋಗುತ್ತಿರುವಾಗ ಮತ್ತು ನದಿಯನ್ನು ಹಾದುಹೋಗುವಾಗ ಅವು ನಮಗೆ ಮುಳುಗಿಸುವುದಿಲ್ಲ, ನೀನು ನಮ್ಮ ಸಂಗಡ ಇದ್ದೀ.ಬೆಂಕಿಯಲ್ಲಿ ನಡೆಯುವಾಗ ಅದು ನಮ್ಮನ್ನು ದಹಿಸುವುದಿಲ್ಲ, ನಮ್ಮ ಒಳಗೆ ಹೊರಗೆ ಇದ್ದುಕೊಂಡು ನೀನು ನಮ್ಮನ್ನು ಕಾಪಾಡುತ್ತೀ.
74. ಯಾವುದೇ ಬಾಂಬ್ ಗಳು , ಸಿಡಿಲುಗಳು, ಮಿಂಚುಗಳು ನಮ್ಮನ್ನು ನಮ್ಮ ಸಭೆಯವರನ್ನು ಆಳಲಿಕ್ಕೆ ಆಗುವುದೇ ಇಲ್ಲ (ಯೆಶಾಯನ43:2,3)
75. ನಾನು ಕಣ್ಣೆತ್ತಿ ಬೆಟ್ಟಗಳ ಕಡೆಗೆ ನೋಡುತ್ತೇನೆ; ನನ್ನ ಸಹಾಯವು ಎಲ್ಲಿಂದ ಬರುವದು?ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದ ಕರ್ತನ ಬಳಿಯಿಂದಲೇ ನನ್ನ ಸಹಾಯವು ಬರುತ್ತದೆ.(ಕೀರ್ತನೆ121:1,2)
76. ಯಾವಾಗಲು ನೀನು ನಮ್ಮ ಸಂಗಡ ನಮ್ಮ ಒಟ್ಟಿಗೆ , ನಮ್ಮ ಹಿಂದೆ ಮುಂದೆ ಇದ್ದುಕೊಂಡು ನಮ್ಮನ್ನು ಕಾಯುವವನಾಗಿದ್ದೀ. ನಮ್ಮ ಪ್ರಾಣವನ್ನು ಮರಣದಿಂದ ನೀನು ತಪ್ಪಿಸಿ ಕಾಪಾಡಿದ್ದಿ.
77. ಇರುಳಲ್ಲಿ ಚಂದ್ರನು ಹಗಲಲ್ಲಿ ಸೂರ್ಯನು ನಮ್ಮನ್ನು ಬಾಧಿಸುವುದಿಲ್ಲ (ಕೀರ್ತನೆ121:6) ನಾವು ಪ್ರಯಾಣದಲ್ಲಿ ಹೋಗುವಾಗ ನಮ್ಮನ್ನು ಕಾಪಾಡುತ್ತಿ ನೀನು ಯಾವಾಗಲೂ ನಮ್ಮ ಸಂಗಡ ಇರುತ್ತೀ.
78. ಬೇಟೆಗಾರನ ಬಲೆಯಿಂದಲೂ ಮರಣಕರ ವ್ಯಾಧಿಯಿಂದ ನಮ್ಮನ್ನು ನಮ್ಮ ಸಭೆಯವರನ್ನು ತಪ್ಪಿಸಿ ಕಾಪಾಡುತ್ತಿ(ಕೀರ್ತನೆ91:3)
79. ಉಪದ್ರವವು ನಮ್ಮ ಮತ್ತು ನಮ್ಮ ಸಭೆಯವರ ಬಳಿಗೆ ಬರುವುದೇ ಇಲ್ಲ(ಕೀರ್ತನೆ91:9,10)
80. ಪರಾತ್ಮಾರರನ್ನು ನಿವಾಸ ಸ್ಥಾನ ಮಾಡಿಕೊಂಡಿದ್ದೇವೆ ಯಾವ ಕೇಡು ನಮಗೆ.ನಮ್ಮ ಸಭೆಯವರಿಗೆ ಯಾವ ಕೇಡು ಸಂಭವಿಸುವುದಿಲ್ಲ.ನಮ್ಮ ಮಗ್ಗುಲಲ್ಲಿ ಸಾವಿರ ಜನರು , ನಮ್ಮ ಬಲಗಡೆಯಲ್ಲಿ ಹತ್ತು ಸಾವಿರ ಜನರು ಸತ್ತು ಬಿದ್ದರೂ ನಾವು ನಮ್ಮ ಸಭೆಯವರು ಸಾಯುವದಿಲ್ಲ(ಕೀರ್ತನೆ:91.7)
81. ನಾವು ಸಾಯುವದಿಲ್ಲ ನಾವು ಬದುಕುತ್ತೇವೆ.ನಾವು ಬದುಕಿಕೊಂಡು ಆತನ ಕ್ರಿಯೆಗಳನ್ನು ವರ್ಣಿಸುವವರಾಗಿದ್ದೇವೆ.(ಕೀರ್ತನೆ118:17)
82. ಇವತ್ತಿನ ದಿನವು ಯೆಹೋವನಿಂದ ನೇಮಿಸಲ್ಪಟ್ಟಿದೆ(ಕೀರ್ತನೆ118.24) ನಾವು ಈ ದಿನದಲ್ಲಿ ಆನಂದಪಡುವವರಾಗಿದ್ದೇವೆ.ನಾವು ಸಂತೋಷಪಡುವವರಾಗಿದ್ದೇವೆ
83. ನಾವು ದೇವರ ಮಹಿಮೆಯ ಪ್ರತ್ಯಕ್ಷತೆಯಾಗಿದ್ದೇವೆ.ಆರೋಗ್ಯದ ಪ್ರತ್ಯಕ್ಷತೆಯಾಗಿದ್ದೇವೆ.ನಾವು ದೇವರ ಪ್ರೀತಿಯ ಪ್ರತ್ಯಕ್ಷತೆಯಾಗಿದ್ದೇವೆ.ಸಂತೋಷದ ಪ್ರತ್ಯಕ್ಷತೆಯಾಗಿದ್ದೇವೆ.
84. ನಾವು ಆತನ ಜನರೆಂದು ಎಲ್ಲಾ, ಜನರು ತಿಳಿದು ಭಯಪಡುವರು (ಧರ್ಮೊಪದೇಶಕಾಂಡ 28:10) ವಿರೋಧಿಸುವ ಹೃದಯದಲ್ಲಿ ಕಳವಳ ಉಂಟಾಗಿ ಕಣಜದ ಹುಳಗಳನ್ನು ಕಳುಹಿಸಿ ಓಡಿಸಿದ ದೇವರಾಗಿದ್ದೀ
85. ನಾವು ಕಟ್ಟದ ಮನೆಯಲ್ಲಿ ತೋಡದ ಬಾವಿಯ ನೀರನ್ನು, ನೆಡದ ತೋಟದ ಫಲವನ್ನು ಅನುಭವಿಸುವವರಾಗಿದ್ದೇವೆ(ಯೆಹೋಶುವ :24.13) ನಮ್ಮ ಕಣಜಗಳು ಸಮೃದ್ದಿಯಾಗಿ ತುಂಬಲ್ಪಟ್ಟಿದೆ.
86. ನಾವು ಬಾಯಫಲವಾಗಿ ಒಳ್ಳೆಯ ಪದಾರ್ಥಗಳನ್ನು ತಿನ್ನುವವರಾಗಿದ್ದೇವೆ. (ಜ್ಞಾನೋಕ್ತಿಗಳು18.20)ಒಳ್ಳೆಯ ಪದಾರ್ಥಗಳನ್ನು ಹೊಟ್ಟೆತುಂಬ ಉಣ್ಣುವವರಾಗಿದ್ದೇವೆ.
87. ಕರ್ತನೇ, ನಮ್ಮ ಬಾಯಲ್ಲಿ ನಿನ್ನ ವಾಕ್ಯಗಳೇ ಬರುತ್ತವೆ ಸ್ತೋತ್ರ .
88. ನಾವು ಮೇಲಿನವರೇ ಹೊರತು ಕೆಳಗಿನವರಲ್ಲ ಅದಕ್ಕೋಸ್ಕರ ಸ್ತೋತ್ರ (ಧಮೋಪದೇಶಕಾಂಡ28:14)
89. ನಮ್ಮ ಹೆಜ್ಜೆಗಳು ನಿನ್ನನಿಂದಲೇ ನೇಮಕವಾಗಿದೇ(ಕೀರ್ತನೇ37:23)
90. ಕರ್ತನೇ,ನೀನು ನಮ್ಮನ್ನು ಹಸಿವೆಗೊಳಿಸುದಿಲ್ಲ(ಜ್ಞಾನೋಕ್ತಿಗಳು10:3)
91. ನಾವು ಭಿಕ್ಷೆ ಬೇಡುವುದೇ ಇಲ್ಲ(ಕೀರ್ತನೆ37:25) ನಾವು ಇನ್ನೊಬ್ಬರಲ್ಲಿ ಸಹಾಯಕ್ಕಾಗಿ ಕೈ ಚಾಚುವುದೇ ಇಲ್ಲ
92. ಕರ್ತನೇ, ನೀತಿವಂತರಿಗೆ ಸಂಭವಿಸುವ ಕಷ್ಟಗಳು ಅನೇಕ ಇದ್ದರು ಅವೆಲ್ಲವುಗಳಿಂದ ಅವರನ್ನು ಬಿಡಿಸಿದ್ದಿ(ಕೀರ್ತನೆ34:19)
93. ದುಷ್ಟನು ನೀತಿವಂತನನ್ನು ಕೊಲ್ಲಬೇಕೆಂದು ಹೊಂಚು ಹಾಕಿದರೂ ಯೆಹೋವನು ಅವನನ್ನು ಸಿಕ್ಕಗೊಡಿಸುವುದೇ ಇಲ್ಲ(ಕೀರ್ತನೆ37:32)
94. ಕ್ರಿಸ್ತನಲ್ಲಿ ನಾವು ನೂತನ ಸೃಷ್ಠಿಗಳಾಗಿದ್ದೇವೆ.(೨ಕೊರಿಂಥ 5.17)
95. ನಮ್ಮನ್ನು ಪ್ರೀತಿಸಿದಾತನ ಮೂಲಕವಾಗಿ ನಾವು ಎಲ್ಲಾ ವಿಷಯಗಳಲ್ಲಿ ಜಯಶಾಲಿಯಾಗಿದ್ದೇವೆ.ಪೂರ್ಣ ಜಯಶಾಲಿಯಾಗಿದ್ದೇವೆ.(ರೋಮಪುರ8:37)
96. ದೇವರು ನಮ್ಮ ಸಂಗಡ ಇರುವಾಗ ನಮ್ಮನ್ನು ಎದುರಿಸುವವರು ಯಾರು (ರೊಮಪುರ8:31)ನಮ್ಮನ್ನು ನೀತಿವಂತರೆಂದು ಹೇಳಿದ ಮೇಲೆ ಅಪರಾಧಿಗಳೆಂದು ಹೇಳುವವರು ಯಾರು(ರೋಮಪುರ8:33)ದೇವರೇ ನಮ್ಮನ್ನು ನೀತಿವಂತರೆಂದು ಕರೆದಿದ್ದಾನೆ.
97. ನಾವು ಯಾರ ಸ್ವರವನ್ನು ಕೇಳುವುದೇ ಇಲ್ಲ(ಯೋಹಾನ10:27)ಜನರು ಎನು ಹೇಳುತ್ತಾರೆ ಅದು ನಾವು ಅಲ್ಲವೇ ಅಲ್ಲ. ದೇವರ ವಾಕ್ಯ ನಮ್ಮ ಕುರಿತಾಗಿ ಎನು ಹೇಳುತ್ತದೆ ಅದೇ ನಾವು ಆಗಿದ್ದೇವೆ.
98. ಮನುಷ್ಯನ ಮೇಲೆ ಭರವಸವಿಡುವವನು ಶಾಪಗೃಸ್ತನು ಯೆಹೋವನ ಮೇಲೆ ಭರವಸವಿಡುವವನು ಅಶೀರ್ವಾದಕ್ಕೆ ಪಾತ್ರನಾಗಿದ್ದಾನೆ.ಆತನು ಕ್ಷಾಮ ವರ್ಷಕ್ಕೆ ಭಯಪಡದೆ ಧಗೆಗೆ ಭಯಪಡದೆ ಆತನು ನೀರಿನ ಕಾಲವೆಗಳ ಬಳಿಯಲ್ಲಿ ನೆಟ್ಟ ಮರದ ಹಾಗಿರುವನು,ಉತ್ತಮವಾದ ಮರವಾಗಿರುವನು(ಯೆರೆಮಿಯಾ17:5,6) ನಾವು ಆತನ್ನಲ್ಲಿ ಭರವಸೆವಿಡುತ್ತಾ ಕ್ಷಾಮ ವರ್ಷದಲ್ಲಿ ಭಯಪಡದೇ , ಧಗೆಗೆ ಭಯಪಡದೇ , ನಾವು ನೀರಿನ ಕಾಲುವೆಗಳ ಬಳಿಯಲ್ಲಿ ನೆಟ್ಟ ಮರದ ಹಾಗಿದ್ದೇವೆ.
99. ಹಾವುಗಳನ್ನು ಚೇಳುಗಳನ್ನು ವೈರಿಯ ಸಮಸ್ತ ಬಲವನ್ನು ತುಳಿಯುವುದಕ್ಕೆ ನಮಗೆ ಅಧಿಕಾರ ಕೊಡಲ್ಪಟ್ಟಿದೆ, ಯಾವುದೂ ನಮಗೆ ಕೇಡುಮಾಡುವುದೇ ಇಲ್ಲ(ಲೂಕ10:19)
100. ದೇವರ ರಾಜ್ಯ ನಮ್ಮ ಒಳಗೆ ಇದೆ , ದೇವರ ರಾಜ್ಯದಲ್ಲಿ ನಾವು ಹುಟ್ಟಿದ್ದೇವೆ (ಲೂಕ17:21)
101. ದೇವರ ಪ್ರಸನ್ನತೆಯಲ್ಲಿ ನಾವು ಹುಟ್ಟಿದ್ದೇವೆ, ದೇವರು ನಮ್ಮನ್ನು ಅಂಧಕಾರದ ದೊರೆತನದಿಂದ ಬಿಡಿಸಿ ತನ್ನ ಪ್ರಿಯ ಕುಮಾರನ ರಾಜ್ಯದೊಳಗೆ ನಮ್ಮನ್ನು ಸೇರಿಸಿದ್ದಾನೆ.ಆ ಕುಮಾರನಲ್ಲಿ ನಮ್ಮ ಪಾಪಗಳು ಪರಿಹಾರವಾಗಿ ನಮಗೆ ಬಿಡುಗಡೆಯಾಯಿತು(ಕೊಲೆಸ್ಸೆ 1.13) ರೋಗ, ವ್ಯಾಧಿಯಿಂದ ನಮಗೆ ಬಿಡುಗಡೆ ಆಗಿದೆ.ಮಾಟ, ಮಂತ್ರದ ಮೇಲೆ ನಾವು ಆಳುವವರಾಗಿದ್ದೇವೆ.
102. ನಾವು ಕ್ರಿಸ್ತನ ದೇಹವಾಗಿದ್ದೇವೆ, ಪರಸ್ಪರ ಒಬ್ಬರಿಗೊಬ್ಬರು ಅಂಗಗಳಾಗಿದ್ದೇವೆ.
103. ನಾವು ಕ್ರಿಸ್ತನಲ್ಲಿ ಜೀವಿಸುತ್ತೇವೆ.
104. ಕ್ರಿಸ್ತನಲ್ಲಿರುವ ನಂಬಿಕೆಯೇ ನಮ್ಮಲ್ಲಿ ಇದೆ,ಅದುದರಿಂದ ನಾವು ನಂಬಿದ್ದೇವೆ ಮತ್ತು ಮಾತಾಡುತ್ತೇವೆ(2ಕೊರಿಂಥ4.13)
105. ಕರ್ತನೇ ನಿನ್ನ ಕನಿಕರವನ್ನು ನಮ್ಮ ನೆನಪಿಗೆ ತಂದುಕೊಂಡು ನಮ್ಮ ಮನಸ್ಸನ್ನು ನೂತನ ಪಡಿಸಿ ಕರ್ತನೇ ನಮ್ಮ ದೇಹಗಳನ್ನು ಮೀಸಲಾಗಿಯು ಸಜೀವಯಜ್ಞವಾಗಿ ಸಮರ್ಪಿಸುತ್ತೇವೆ.(ರೋಮಪುರ12-1,2,3)ಇಹಲೋಕದ ನಡವಳಿಕೆಯನ್ನು ಸಂಪ್ರದಾಯಗಳನ್ನು ಅನುಸರಿಸದೆ ನೂತನ ಮನಸ್ಸನ್ನು ಹೊಂದಿಕೊಂಡು ಪರಲೋಕ ಭಾವದವರಾಗಿದ್ದೇವೆ,ಅದಕ್ಕೋಸ್ಕರ ಸ್ತೋತ್ರವನ್ನು ಸಲ್ಲಿಸುತ್ತೇವೆ.ಇದೇ ವಿವೇಕಪೂರ್ವಕವಾದ ಆರಾಧನೆ.
106. ದೇವರ ಜೀವ ನಮ್ಮಲ್ಲಿ ಇದೆ.ನಾವು ದೇವರ ಮಹಿಮೆ ಆಗಿದ್ದೇವೆ.
107. ದೇವರ ಡಿ ಎನ್ ಎ ನಮ್ಮಲ್ಲಿ ಇದೆ.
108.ನಾವು ದೇವರ ಮಕ್ಕಳಾಗಿದ್ದೇವೆ, ನಾವು ದೇವರಿಂದ ಕಾಪಾಡ್ಲಪಟ್ಟಿದ್ದೇವೆ ಒಳ್ಳೆಯದಾದದ್ದು ಮೆಚ್ಚಿಕೆಯಾದದ್ದು ಯಾವುದೆಂದು ನಾವು ತಿಳಿದುಕೊಳ್ಳುವವರಾಗಿದ್ದೇವೆ.
109. ಕರ್ತನೇ ನಾವು ಹಾಲು ಕುಡಿಯುವವರು ಅಲ್ಲ ಗಟ್ಟಿಯಾದ ಆಹಾರವನ್ನು ತಿನ್ನುವವರು ಜ್ಞಾನೇಂದ್ರಿಯಗಳನ್ನು ಜ್ಞಾನದಿಂದ ಶಿಕ್ಷಿಸಿ ಇದು ಒಳ್ಳೇದು ಇದು ಕೆಟ್ಟದು ಎಂದು ಬೇಧವನ್ನು ಅರಿತುಕೊಳ್ಳುವವರಾಗಿ ದ್ದೇವೆ (ಇಬ್ರಿಯ 5:14)
110. ಕರ್ತನೇ ನಮ್ಮ ಆತ್ಮೀಕ ಕಿವಿಗಳು ಮಂದ ಇಲ್ಲ (ಇಬ್ರಿಯ 5:11)ನಮ್ಮ ಕಿವಿಗಳು ಕೇಳ್ತ ಇದೆ, ನಮ್ಮ ಆತ್ಮವು ಗ್ರಹಿಸುತ್ತದೆ. ನಮ್ಮ ಕಣ್ಣುಗಳು ಕಾಣತ್ತಾ ಇವೆ(1ಕೊರಿಂಥ 2:9,10,11)
111. ನಮಗೆ ದೇವರ ವಾಕ್ಯಗಳು ಅರ್ಥ ಆಗ್ತ ಇದೆ,ನಾವು ದೇವರ ವಾಕ್ಯವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವವರಾಗಿದ್ದೇವೆ.
112. ದೇವರ ವಾಕ್ಯವನ್ನು ಹಗಲಿರುಳು ಧ್ಯಾನಿಸುವವರಾಗಿದ್ದೇವೆ.ಅದನ್ನು ಬಿಟ್ಟು ಎಡಕ್ಕೂ ಬಲಕ್ಕೂ ನಾವು ಹೋಗುವುದೇ ಇಲ್ಲ,ನಾವು ಎಲ್ಲಿ ಹೋದರೂ ಸಫಲವಾಗುತ್ತೇವೆ,ನಾವು ಎಲ್ಲಿ ಹೋದರೂ ಜಯಶಾಲಿಗಳಾಗುತ್ತೇವೆ,ಯೇಸುವಿನ ನಾಮದಲ್ಲಿ ಜಯಶಾಲಿಗಳಾಗಿದ್ದೇವೆ.
113. ನಾನು ನನ್ನ ಮನೆಯವರು ಯೇಹೋವನನ್ನು ಸೇವಿಸುವವರಾಗಿದ್ದೇವೆ.
114. ನಾನು ನನ್ನ ಮನೆಯವರು ನಮ್ಮ ಸಭೆಯವರು ಒಟ್ಟಾಗಿ ಕರ್ತನನ್ನುಆರಾಧಿಸುವವರಾಗಿದ್ದೇವೆ.
115. ನಾವು ಒಬ್ಬರನೊಬ್ಬರು ಪ್ರೀತಿಸುವವರಾಗಿದ್ದೇವೆ.
116. ಕರ್ತನೇ,ಕ್ರಿಸ್ತನಲ್ಲಿ ನಾವು ಪರಲೋಕದಲ್ಲಿ ಕುಳಿತುಕೊಂಡಿದ್ದೇವೆ (ಎಫೆಸ2.7)
117. ನಂಬುವವರಿಂದ ಈ ಸೂಚಕಕಾರ್ಯಗಳು ಉಂಟಾಗುತ್ತದೆ (ಮಾರ್ಕ16:17)ಕರ್ತನೇ ನಾವು ನಂಬುವವರಾಗಿದ್ದೇವೆ ನೀನು ಹೇಳಿದ್ದಿ ನನ್ನನ್ನು ನಂಬುವವನು ನಾನು ನಡೆಸಿದ ಕ್ರಿಯೆಗಳನ್ನು ತಾನು ನಡಿಸುವನು ಮತ್ತು ಅವುಗಳಿಗಿಂತ ಮಹತ್ತಾದ ಕ್ರಿಯೆಗಳನ್ನು ನಡಿಸುತ್ತಾನೆ (ಯೋಹಾನ 14:12)
118. ಕರ್ತನೇ, ನಿನ್ನ ಬರೋಣಕ್ಕೆ ನಾವು ಕಾಯುತ್ತಾ ಇದ್ದೇವೆ.ತುತೂರಿಯ ಶಬ್ದಕ್ಕೆ ಕ್ಷಣದಲ್ಲೇ ರೆಪ್ಪೆ ಬಡಿಯುವಷ್ಟರೊಳಗೆ ನಾವು ಮಾರ್ಪಡುತ್ತೇವೆ(1ಕೊರಿಂಥ15.52)
119. ನಾವು ಯಾವಾಗಲೂ ಒಳ್ಳೇದನ್ನು ಮಾತಾಡುತ್ತೇವೆ.ನಕಾರಾತ್ಮಕ ಸಂಗತಿಗಳನ್ನು ಮಾತಾಡುವುದಿಲ್ಲ, ಭಾವನೆಗಳನ್ನು ಮಾತಾಡುವುದಿಲ್ಲ ನಿನ್ನ ವಾಕ್ಯ ಎನು ಹೇಳುತ್ತದೆ ಅದನ್ನೇ ನಾವು ಮಾತಾಡುತ್ತೇವೆ,ಅದಕ್ಕೋಸ್ಕರ ನಾವು ನಿನಗೆ ಕೃತಜ್ಞತೆಯನ್ನು ಸಲ್ಲಿಸುತ್ತೇವೆ.
120. ಕರ್ತನೇ, ನಿನ್ನ ವಾಕ್ಯವು ಬೆಂಕಿಗೂ ಬಂಡೆಯನ್ನು ಒಡೆದು ಬಿಡುವ ಚಮಟಿಗೆಗೂ ಸಮಾನವಾಗಿದೆ(ಯೆರೆಮಿಯಾ 23.29)
121. ಕಿತ್ತುಹಾಕುವದು, ಕೆಡವುವದು, ನಾಶಪಡಿಸುವದು, ಹಾಳುಮಾಡುವದು, ಕಟ್ಟುವದು, ನೆಡುವದು, ಈ ಕಾರ್ಯಗಳನ್ನು ಮಾಡುವದಕ್ಕೋಸ್ಕರ ಜನಾಂಗಗಳ ಮೇಲೂ ರಾಜ್ಯಗಳ ಮೇಲೂ ನಮಗೆ ಅಧಿಕಾರ ಕೊಡಲ್ಪಟ್ಟಿದೆ.(ಯೆರೆಮಿಯಾ 1:9,10)
122. ನಾವು ನಿನ್ನ ವಾಕ್ಯವನ್ನು ಪರಿಸ್ಥಿತಿಗಳಿಗೆ ರೋಗಗಳಿಗೆ ಸಮಸೈಗಳಿಗೆ ಮಾತಾಡುವವರಾಗಿದ್ದೇವೆ.ನಿನ್ನ ವಾಕ್ಯ ಎನು ಹೇಳುತ್ತದೆ ಅದನ್ನೇ ನಾವು ಮಾಡುತ್ತೇವೆ.
123. ದೇವರ ರಾಜ್ಯವು ಮಾತಿನಲ್ಲಿ ಅಲ್ಲ ಶಕ್ತಿಯಲ್ಲಿಯೇ ಅಧಾರಗೊಂಡಿದೆ. (1ಕೊರಿಂಥ4.20)ಯಾಕಂದರೆ ತಿನ್ನುವದೂ ಕುಡಿಯುವದೂ ದೇವರ ರಾಜ್ಯವಲ್ಲ; ನೀತಿಯೂ ಸಮಾಧಾನವೂ ಪವಿತ್ರಾತ್ಮನಿಂದಾಗುವ ಆನಂದವೂ ಆಗಿದೆ.(ರೋಮಪುರ14:17)
124. ಕರ್ತನೇ, ನಾವು ನಮಗೋಸ್ಕರ ಜೀವಿಸುವುದಿಲ್ಲ,ನಾವು ನಿನಗೋಸ್ಕರ ಜೀವಿಸುವವರು ನಾವು ನಿನ್ನ ಚಿತ್ತಾನುಸಾರ ಜೀವಿಸುವವರಾಗಿದ್ದೇವೆ.
125. ನಾವು ಮರಣದಿಂದ ಪಾರಾಗಿ ಜೀವಕ್ಕೆ ಸೇರಿದ್ದೇವೆ.(ಯೋಹಾನ 5:24)
126. ನಾವು ದೇವರ ವಾಕ್ಯವನ್ನು ಕೇಳುವವರು ಮಾತ್ರ ಆಗದೇ ಅದನ್ನು ಕಾರ್ಯದಲ್ಲಿ ಮಾಡುವವರಾಗಿದ್ದೇವೆ, ಯಾವಾಗಲೂ ದೇವರ ವಾಕ್ಯವೆಂಬ ಕನ್ನಡಿಯಲ್ಲಿ ನಮ್ಮನೇ ನಾವು ನೋಡುವವರಾಗಿದ್ದೇವೆ.(ಯಾಕೋಬ 1:22)
127. ನಿನ್ನ ವಿಶೇಷವಾದ ಜ್ಞಾನವನ್ನು ನಿನ್ನ ಮಹಿಮೆಗೋಸ್ಕರ ಮರೆಮಾಡಿದ ಜ್ಞಾನವನ್ನು ನಮಗೆ ಪ್ರಕಟಪಡಿಸಿದಕೋಸ್ಕರ ನಿನಗೆ ಸ್ತೊತ್ರ ಸಲ್ಲಿಸುತ್ತೇವೆ(1ಕೋರಿಂಥ2:7) ನಿನ್ನ ಸುರಕ್ಷತೆಯನ್ನು ಹೊಂದಿದ್ದೇವೆ.
128. ನಮ್ಮ ಜನರನ್ನು ನಮಗೆ ಅಧೀನಪಡಿಸುವಾತನು ನೀನಾಗಿದ್ದೀ ಅದಕ್ಕೋಸರ ಸ್ತೋತ್ರ.
129. ನೀತಿವಂತರ ಮಕ್ಕಳು ಎಣ್ಣೇ ಮರದ ಸಸಿಗಳಂತೆ ಇರುತ್ತಾರೆ,ನಮ್ಮ ಮಕ್ಕಳು ಎಣ್ಣೇ ಮರದ ಸಸಿಗಳಂತೆ ಇರುತ್ತಾರೆ.
130. ಕರ್ತನೇ, ನಾವು ಯಾವಾಗಲೂ ದುಡುಕಿ ಮಾತಾಡುವುದಿಲ್ಲ.ತಾಳ್ಮೆಯಿಂದ ಮಾತಾಡುತ್ತೇವೆ.(ಜ್ಞಾನ್ತೋಕಿ4:24) ನಾವು ವ್ಯರ್ಥವಾದ ಮಾತುಗಳನ್ನು ಮಾತಾಡುವುದಿಲ್ಲ ಯಾರಿಗೂ ನೋವಿಸುವ ಮಾತುಗಳನ್ನು ಮಾತಾಡುವುದಿಲ್ಲ ಸಮಾಧಾನದಲ್ಲಿ ಮಾತಾಡುತ್ತೇವೆ,ಇನ್ನೊಬ್ಬರನ್ನು ಮೇಲಕ್ಕೆತ್ತುವ ಉನ್ನತಕ್ಕೆ ನಡೆಸುವ ಮಾತುಗಳೇ ಹೊರಡಿಸುತ್ತೇವೆ.
131. ಕರ್ತನೇ, ಸ್ವಾರ್ಥವು ನಮ್ಮನ್ನು ಆಳುವುದಿಲ್ಲ, ಭಾವನೆಗಳು ನಮ್ಮನ್ನು ಆಳುವುದಿಲ್ಲ ಖಿನ್ನತೆಗಳು ನಮ್ಮನ್ನು ಆಳುವುದಿಲ್ಲ,ನಮ್ಮ ಒಳಗೆ ಇರುವ ಕ್ರಿಸ್ತನಲ್ಲಿ ಎಲ್ಲ ಒಳ್ಳೆಯ ಸಂಗತಿಗಳೇ ಇವೆ.
132. ನಾವು ದೇವರಿಂದ ಹುಟ್ಟಿದ್ದೇವೆ ಲೋಕದಲ್ಲಿರುವವನಿಗಿಂತ ನಮ್ಮಲ್ಲಿರುವಾತನು ಹೆಚ್ಚಿನವನು (1ಯೋಹಾನ 4:4)
133. ನಾವು ಆತ್ಮಪ್ರೇರಿತರಾಗಿ ಮಾತಾಡುವವರಾಗಿದ್ದೇವೆ.ನಾವು ಇಂದ್ರಿಯ ಪ್ರೇರಿತರಾಗಿ ಮಾತಾಡುವುದೇ ಇಲ್ಲ ಕರ್ತನೇ, ನಿನಗೆ ಸ್ತೋತ್ರ. ಏನೆಲ್ಲಾ ನಾವು ಘೋಶಿಸಿದ್ದೇವೆಯಾ ಅದರ ಸುತ್ತಲು ದೇವದೂತರುಗಳು ಚಲಿಸಿದ್ದಾರೆ ಸ್ತೋತ್ರ.ನಾವು ಏನನ್ನು ಘೋಶಿಸಿದ್ದೇವೆ ಅದು ಆಗಿದೆ.
134. ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ಪ್ರಭಾವಸ್ವರೂಪನಾದ ತಂದೆಯೂ ಆಗಿರುವಾತನು ತನ್ನ ವಿಷಯವಾಗಿ ತಿಳುವಳಿಕೆಯನ್ನು ಕೊಟ್ಟು ಇದುವರೆಗೆ ಗುಪ್ತವಾಗಿದ್ದ ಸತ್ಯಾರ್ಥಗಳನ್ನು ತಿಳುಕೊಳ್ಳುವ ಜ್ಞಾನವುಳ್ಳ ಆತ್ಮವನ್ನು ನಮಗೆ ದಯಪಾಲಿಸಿದ್ದಾನೆ ಸ್ತೋತ್ರ.ಆತನು ನಮ್ಮ ಮನೋನೇತ್ರಗಳನ್ನು ಬೆಳಗಿಸಿ ಆತನಿಂದ ಕರಿಸಿಕೊಂಡವರು ನಿರೀಕ್ಷಿಸುವ ಪದವಿ ಎಂಥದೆಂಬದನ್ನೂ ದೇವಜನರೆಂಬ ಆತನ ಸ್ವಾಸ್ಥ್ಯದ ಮಹಿಮಾತಿಶಯವು ಎಂಥದೆಂಬದನ್ನೂ ನಂಬುವವರಾದ ನಮ್ಮಲ್ಲಿ ಆತನು ಸಾಧಿಸುವ ಪರಾಕ್ರಮವು ಎಷ್ಟು ಅತಿಶಯವಾದದ್ದೆಂಬದನ್ನೂ ನಾವು ತಿಳುಕೊಳ್ಳುವಂತೆ ಅನುಗ್ರಹಿಸಿದ್ದಾನೆ. ಆತನ ಬಲಾತಿಶಯವು ಎಷ್ಟು ಮಹತ್ತಾದದ್ದೆಂಬದು ಕ್ರಿಸ್ತನಲ್ಲಿ ತೋರಿಬಂದಿದೆ.ಹೇಗಂದರೆ ಆತನು ಕ್ರಿಸ್ತನಲ್ಲಿ ಸತ್ತಿದ್ದ ನಮ್ಮನ್ನು ಬದುಕಿಸಿ ಪರಲೋಕದೊಳಗೆ ಸಕಲ ರಾಜ್ಯತ್ವ ಅಧಿಕಾರ ಮಹತ್ವ ಪ್ರಭುತ್ವಾದಿಗಳ ಮೇಲೆಯೂ ಈ ಲೋಕದಲ್ಲಿ ಮಾತ್ರವಲ್ಲದೆ ಬರುವ ಲೋಕದಲ್ಲಿ ಸಹ ಹೆಸರುಗೊಂಡವರೆಲ್ಲರ ಮೇಲೆಯೂ ತನ್ನ ಬಲಗಡೆಯಲ್ಲಿ ಕೂಡ್ರಿಸಿಕೊಂಡಿದ್ದಾನೆ ಸ್ತೋತ್ರ. ಆತನು ಸಮಸ್ತವನ್ನೂ ಕ್ರಿಸ್ತನಲ್ಲಿ ನಮ್ಮ ಪಾದಗಳ ಕೆಳಗೆ ಹಾಕಿದ್ದಾನೆ.ಆತನು ನಮಗೆ ಶಿರಸ್ಸು, ನಾವು ಆತನ ದೇಹವಾಗಿದ್ದೇವೆ, ನಾವು ಆತನಲ್ಲಿ ಪರಿಪೂರ್ಣತೆಯನ್ನು ಹೊಂದಿದ್ದೇವೆ.(ಎಫೆಸ1:17-23)
135. ನಾವು ದೇವರಾತ್ಮನ ಮೂಲಕ ಆಂತರ್ಯದಲ್ಲಿ ವಿಶೇಷಬಲ ಹೊಂದಿದವರಾಗಿದ್ದೇವೆ ಕ್ರಿಸ್ತನು ನಮ್ಮ ನಂಬಿಕೆಯ ಮೂಲಕ ನಮ್ಮ ಹೃದಯಗಳಲ್ಲಿ ವಾಸಮಾಡುತ್ತಾ ಆತನು ತನ್ನ ಮಹಿಮಾತಿಶಯದ ಪ್ರಕಾರ ಅನುಗ್ರಹಿಸಿದ್ದಾನೆ ;ನಾವು ದೇವರ ಪ್ರೀತಿಯಲ್ಲಿ ನೆಲೆಗೊಂಡು ನಿಂತು ಅದರ ಅಗಲ ಉದ್ದ ಎತ್ತರ ಆಳ ಎಷ್ಟೆಂಬದನ್ನು ದೇವಜನರೆಲ್ಲರೊಂದಿಗೆ ಗ್ರಹಿಸಲೂ ಜ್ಞಾನಕ್ಕೆ ಮೀರುವ ಕ್ರಿಸ್ತನ ಪ್ರೀತಿಯನ್ನು ತಿಳುಕೊಳ್ಳಲೂ ಪೂರ್ಣಶಕ್ತರಾಗಿದ್ದು ಆತನ ಸಂಪೂರ್ಣತೆಯ ಮಟ್ಟಿಗೂ ಪರಿಪೂರ್ಣರಾಗುವ ಹಾಗೆ ನಮಗೆ ದಯಪಾಲಿಸಲಿದ್ದಾನೆ,ಸ್ತೋತ್ರ (ಎಫೆಸ3:16–19)
136. ನಮ್ಮ ಪ್ರೀತಿಯು ಹೆಚ್ಚುತ್ತಾ ಹೆಚ್ಚುತ್ತಾ ಪೂರ್ಣ ಜ್ಞಾನವಿವೇಕಗಳಿಂದ ಕೂಡಿ ಉತ್ತಮ ಕಾರ್ಯಗಳು ಯಾವವೆಂದು ನಾವು ವಿವೇಚಿಸುವವರ ಹಾಗೆ ದಯಪಾಲಿಸಿದ್ದಾನೆ.
137. ನಮ್ಮ ದೇವರು ಕ್ರಿಸ್ತ ಯೇಸುವಿನ ಮೂಲಕ ತನ್ನ ಪ್ರಭಾವದ ಐಶ್ವರ್ಯಕ್ಕೆ ತಕ್ಕ ಹಾಗೆ ನಮ್ಮ ಪ್ರತಿಯೊಂದು ಕೊರತೆಯನ್ನು ನೀಗಿಸಿದ್ದಾನೆ.
138. ಕ್ರಿಸ್ತನು ಎಂಥವನಾಗಿದ್ದಾನೋ ನಾವು ಅಂಥವರಾಗಿಯೇ ಈ ಲೋಕದಲ್ಲಿದ್ದೇವೆ.
139. ಪ್ರೀತಿಯು ಇರುವಲ್ಲಿ ಹೆದರಿಕೆಯಿಲ್ಲ. ಹೆದರಿಕೆಯು ಯಾತನೆಯನ್ನು ಹೊಂದುತ್ತಾ ಇರುವದು; ಪೂರ್ಣಪ್ರೀತಿಯು ಹೆದರಿಕೆಯನ್ನು ಹೊರಡಿಸಿಬಿಡುತ್ತದೆ.
140. ಯಾಕಂದರೆ ದೇವರಿಂದ ಹುಟ್ಟಿರುವಂಥದೆಲ್ಲವು ಲೋಕವನ್ನು ಜಯಿಸುತ್ತದೆ. ಲೋಕವನ್ನು ಜಯಿಸಿದಂಥದು ನಮ್ಮ ನಂಬಿಕೆಯೇ.
141. ನಾವು ಒಳ್ಳೆಯ ಆಲೋಚನೆಗಳನ್ನು ಸ್ವೀಕರಿಸುತ್ತೇವೆ,ದೇವರ ಯೋಜನೆಗಳನ್ನು ಸ್ವೀಕರಿಸುತ್ತೇವೆ,ನಮ್ಮನ್ನು ಯಾವಾಗಲೂ ಕೆಟ್ಟ ಆಲೋಚನೆಗಳನ್ನು ಆಳುವುದಿಲ್ಲ ಅದನ್ನು ನಾವು ತಿರಸ್ಕರಿಸುತ್ತೇವೆ,ಒಳ್ಳೆಯ ಯೋಜನೆಗಳು ನಮ್ಮದು.ಒಳ್ಳೆಯ ಜನರು ನಮ್ಮನ್ನು ಭೇಟಿ ಆಗುವವರಾಗಿದ್ದಾರೆ ಸ್ತೋತ್ರ.
142. ಕ್ರಿಸ್ತನ ಪ್ರೀತಿಯು ನಮಗೆ ಒತ್ತಾಯ ಮಾಡುತ್ತದೆ (2ಕೊರಿಂಥದವರಿಗೆ5:14)
143. ನಾವು ಯಾರನ್ನು ಇನ್ನು ಮುಂದೆ ಶರೀರಸಂಬಂಧವಾಗಿ ಅರಿತುಕೊಳ್ಳುವುದಿಲ್ಲ, ನೋಡುವುದಿಲ್ಲ(2ಕೊರಿಂಥದವರಿಗೆ5:16 )ಯಾರನ್ನು ಅರ್ಥಮಾಡಿಕೊಳ್ಳುವುದಿಲ್ಲ.
144. ನಾವು ಎಲ್ಲರನ್ನು ಆತ್ಮದಲ್ಲಿ ನೋಡುವವರಾಗಿದ್ದೇವೆ,ಆತ್ಮದಲ್ಲಿ ಒಬ್ಬರನೊಬ್ಬರು ಪ್ರೀತಿಸುತ್ತೇವೆ.ಒಬ್ಬರನೊಬ್ಬರು ಕ್ಷಮಿಸುತ್ತೇವೆ.ನಮಗೆ ಯಾವ ವೈರಿಗಳು ಇಲ್ಲ ನಾವು ಎಲ್ಲರನ್ನೂ ಇಷ್ಟಪಡುತ್ತೇವೆ.ನಾವು ಎಲ್ಲರನ್ನು ಪ್ರೀತಿಸುತ್ತೇವೆ.
145. ಉರಿಯುವಂತಹ ಜ್ಞಾನ,ಉರಿಯುವಂತಹ ಮಾತುಗಳು ನಮ್ಮಲ್ಲಿ ಇವೆ.
146. ನಾವು ಸಕಲ ಆತ್ಮೀಯ ಜ್ಞಾನವನ್ನೂ ಗ್ರಹಿಕೆಯನ್ನೂ ಹೊಂದಿದವರಾಗಿದ್ದೇವೆ ಸ್ತೋತ್ರ. ಕರ್ತನ ಚಿತ್ತದ ವಿಷಯವಾದ ತಿಳುವಳಿಕೆಯಿಂದ ತುಂಬಿಕೊಂಡು ಆತನಿಗೆ ಯೋಗ್ಯರಾಗಿ ನಡೆದು ಎಲ್ಲಾ ವಿಧದಲ್ಲಿ ಆತನನ್ನು ಸಂತೋಷಪಡಿಸುವವರಾಗಿದ್ದೇವೆ ಸ್ತೋತ್ರ. ನಾವು ಸಕಲ ಸತ್ಕಾರ್ಯವೆಂಬ ಫಲವನ್ನು ಕೊಡುತ್ತಾ ದೇವಜ್ಞಾನದಿಂದ ಅಭಿವೃದ್ಧಿಯಾಗಿದ್ದೇವೆ ಸ್ತೋತ್ರ.ಆತನ ಮಹಿಮಶಕ್ತಿಯ ಪ್ರಕಾರ ಪರಿಪೂರ್ಣ ಬಲಹೊಂದಿ ಬಲಿಷ್ಠರಾಗಿ ಆನಂದಪೂರ್ವಕವಾದ ತಾಳ್ಮೆಯನ್ನೂ ದೀರ್ಘಶಾಂತಿಯನ್ನೂ ಯಾವಾಗಲೂ ತೋರಿಸುವವರಾಗಿರುತ್ತಾ ಬೆಳಕಿನ ರಾಜ್ಯದೊಳಗೆ ದೇವಜನರ ಬಾಧ್ಯತೆಯಲ್ಲಿ ಪಾಲುಗಾರರಾಗುವದಕ್ಕೆ ನಮ್ಮನ್ನು ಯೋಗ್ಯರನ್ನಾಗಿ ಮಾಡಿದ ತಂದೆಗೆ ಕೃತಜ್ಞತಾಸ್ತುತಿ ಮಾಡುವವರಾಗಿದ್ದೇವೆ ಸ್ತೋತ್ರ.
147. ನಾವು ಆತ್ಮಪ್ರೇರಿತರಾಗಿ ಮಾತಾಡುವವರಾಗಿದ್ದೇವೆ.ನಾವು ಇಂದ್ರಿಯ ಪ್ರೇರಿತರಾಗಿ ಮಾತಾಡುವುದೇ ಇಲ್ಲ. ಎಲ್ಲಾ ಬಾಗಿಲುಗಳು ನಮಗೆ ತೆರೆಯಲ್ಪಟ್ಟಿದೆ ಹಣಕಾಸಿನ ಬಾಗಿಲುಗಳುನ್ನು ನಾವು ತೆರೆಯುತ್ತಾ ಇದ್ದೇವೆ.ಕರ್ತನೇ, ನಿನಗೆ ಸ್ತೋತ್ರ.ಏನೆಲ್ಲಾ ನಾವು ಘೋಶಿಸಿದ್ದೇವೆಯಾ ಅದರ ಸುತ್ತಲು ದೇವದೂತರುಗಳು ಚಲಿಸಿದ್ದಾರೆ ಸ್ತೋತ್ರ.ನಾವು ಏನನ್ನು ಘೋಶಿಸಿದ್ದೇವೆ ಅದು ಆಗಿದೆ ಸ್ತೋತ್ರ.
Why I have to Confess?
Updating…..
We Belive Therefore we speak
Updating